top of page


ಕುಂಚದಂಚಿನ ವಿಸ್ಮಯ - ಕಲಾ ಕನೆಕ್ಟ್
ಮೇ 1ರಿಂದ 3ರವರೆಗೆ ಮೂರು ದಿನಗಳ ಕಾಲ ಮುಂಬೈಯ ಪ್ರತಿಷ್ಠಿತ ನೆಹರೂ ಸೆಂಟರಿನಲ್ಲಿ 'ಕಲಾ ಕನೆಕ್ಟ್' ವಾರ್ಷಿಕ ಚಿತ್ರಕಲಾ ಪ್ರದರ್ಶನ ಯಶಸ್ವಿಯಾಗಿ ಜರುಗಿತು. ಹೊಸ ಕಲಾವಿದರಿಗೆ ವೇದಿಕೆ ನೀಡಿ, ಕಲಾಪ್ರೇಮಿಗಳು ಕಲಾವಿದರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಕೃತಿಗಳನ್ನು ಇನ್ನಷ್ಟು ಅರಿಯುವ ಅವಕಾಶವನ್ನು ಒದಗಿಸುವುದು ಇಂತಹ ಕಲಾಪ್ರದರ್ಶನಗಳ ಉದ್ದೇಶ. ಈ ಬಾರಿಯ ಪ್ರದರ್ಶನದಲ್ಲಿ ವಿವಿಧ ಕಲಾವಿದರ ಅನನ್ಯವಾದ ಸೃಜನಾತ್ಮಕ ಕಲೆಗಾರಿಕೆ ಮನಸೆಳೆಯುವಂತಿತ್ತು. ಸೌರ, ಪಟಚಿತ್ರ, ಮಧುಬನಿ, ಪಿಚ್ವಾಯಿ ಮುಂತಾದ ಸಾಂಪ್ರದಾಯಿಕ ಚಿತ್ರಕಲೆಗಳು, ನವ್ಯ, ಅಮೂರ್ತ ಚಿತ್ರಕಲೆ ಅಥವಾ ಅಬ್ಸ್ಟ್ರಾಕ್ಟ್ ಪೇಂಟಿಂಗ್
vidyaram2
May 182 min read


ಭಾರತೀಯ ಸೌಂದರ್ಯಶಾಸ್ತ್ರಕ್ಕೆ ಹೀಗೊಂದು ಸರಳ ಪ್ರವೇಶ
ನಿರಂತರವಾಗಿ ಹೊಸತನ್ನೇನಾದರೂ ಕಲಿಯುತ್ತಲಿರುವುದು ಮೈಮನಗಳನ್ನು ಚುರುಕುಗೊಳಿಸಿ ಲವಲವಿಕೆಯಿಂದಿರಲು ಉತ್ತಮವಾದ ಉಪಾಯ. ಯಾವುದೇ ವಿಷಯವನ್ನು ಸ್ವಯಮಾಚಾರ್ಯರಾಗಿ ಸ್ವಾಧ್ಯಾಯದಿಂದ ಅಥವಾ ಗುರುಮುಖೇನ ಕಲಿಯಲು ಸಾಧ್ಯವಿದೆ. ಇಂದಿನ ಯುಗದಲ್ಲಂತೂ ಅಂತರ್ಜಾಲದ ಮೂಲಕ ಹೊಸ ವಿಷಯಗಳನ್ನು ಅರಿಯುವುದು ಬಹು ಸುಲಭವಾಗಿದೆ. ಆದರೆ ಅವಕಾಶವಿದ್ದಲ್ಲಿ, ನಮ್ಮ ಭಾರತೀಯ ಪರಂಪರೆಯಲ್ಲಿ ಹೇಳುವಂತೆ ಗುರುಮುಖೇನ ಕಲಿಯುವುದೇ ಶ್ರೇಷ್ಠ. ಮುಂಬೈ ವಿಶ್ವವಿದ್ಯಾಲಯದಲ್ಲಿ ವಯಸ್ಸಿನ ನಿರ್ಬಂಧವಿಲ್ಲದೆ ಅನೇಕ ವಿಷಯಗಳ ಕಲಿಕೆಗೆ ಅವಕಾಶವಿರುವುದು ಹೆಮ್ಮೆಯ ಸಂಗತಿ. ಇಲ್ಲಿಯ ವಿವಿಧ ಭಾಷಾ ವಿಭಾಗಗಳಲ್ಲಿ ಅನೇಕ ಭಾಷೆಗಳ ಕಲಿಕೆಗೆ
vidyaram2
May 184 min read


ಅಜ್ಞಾನದಿಂದ ‘ಎಐ’ಜ್ಞಾನದವರೆಗೆ …
'ಜೆಮಿನಿ ಎಐ'ನಿಂದ ರಚಿತವಾದ ಚಿತ್ರ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಜ್ಯೋತಿಯನ್ನು ಮನೆ-ಮನಗಳಲ್ಲಿ ಬೆಳಗುವ ಸಂಕೇತವೇ ದೀಪಾವಳಿ ಹಬ್ಬ. ಮಾನವನ ಔನ್ನತ್ಯದ ಹಾದಿಯು ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ’, ಅಂದರೆ ಮಿಥ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಮತ್ತು ನಶ್ವರದಿಂದ ಶಾಶ್ವತದೆಡೆಗೆ ಸಾಗಬೇಕು ಎನ್ನುವುದು ಸನಾತನ ಧರ್ಮದ ನಿಲುವು. ಕತ್ತಲಿಗೆ ಹೆದರಿದ ಆದಿಮಾನವನು ಸಾವಿರಾರು ವರ್ಷಗಳ ಹಿಂದೆ ಬೆಂಕಿಯನ್ನು ಕಂಡುಹಿಡಿದು ಜ್ಞಾನದ ಮೊದಲ ಕಿಡಿಯನ್ನು ಹೊತ್ತಿಸಿದನು. ಅಲ್ಲಿಂದ ಮೊದಲಾಗಿ ಅವನ ಪ್ರಗತಿಪಥದ ಪ್ರತಿಯೊಂದು ಹೆಜ್ಜೆಯೂ
vidyaram2
Oct 22, 20256 min read


ಯುಗಾದಿಯ ಸವಿ ನೆನಪು….
ಬ್ರಹ್ಮಾಂಡದ ಆದಿ, ಅಂತ್ಯವನ್ನು ಅರಿಯಲು ಸಾಧ್ಯವಿಲ್ಲ. ಅದು ಅನಂತ. ಈ ಅನಂತ ಬ್ರಹ್ಮಾಂಡದ ವಯಸ್ಸನ್ನು ಅಳೆಯುವುದು ಕಾಲವೆಂಬ ಆಯಾಮದಿಂದ. ಕಾಲಕ್ಕೂ ಕೊನೆಮೊದಲಿಲ್ಲ. ಕೊನೆಮೊದಲಿಲ್ಲದ್ದನ್ನು ಸೂಚಿಸುವುದು ವೃತ್ತ. ವೃತ್ತದ ಮೇಲೆ ನಡೆಯಲಾರಂಭಿಸಿದರೆ ಹೊರಟು ಸುತ್ತಿ ಬಂದಲ್ಲಿಗೆ ಸೇರುತ್ತೇವೆ. ಕಾಲವೂ ಹೀಗೇ. ಕೊನೆಮೊದಲಿಲ್ಲದೆ ಮುಂದೆ ಉರುಳುವ ಕಾಲವು ಉರುಳಿ, ಉರುಳಿ ಮತ್ತೆ ಬಂದಲ್ಲೆ ಸೇರುತ್ತದೆ ಎಂಬ ತತ್ವದಂತೆ ಅದನ್ನು ‘ಕಾಲಚಕ್ರ’ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ಪರಂಪರೆಯಲ್ಲಿರುವ (ಹಿಂದೂ ತತ್ತ್ವಶಾಸ್ತ್ರದಲ್ಲಿ) ಯುಗದ ಪರಿಕಲ್ಪನೆಯು ಕಾಲಚಕ್ರವನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸುತ್ತದ
vidyaram2
Apr 24, 20242 min read


ಪ್ರಜಾಪ್ರಭುತ್ವದ ಪ್ರಭಾವೀ ಪರಿಕರ - ಚುನಾವಣೆ
ಅಬ್ರಹಾಂ ಲಿಂಕನ್ ಅವರು ಹೇಳಿರುವಂತೆ ‘ಡೆಮಾಕ್ರಸಿ ಇಸ್ ದಿ ಗವರ್ನಮೆಂಟ್ ಆಫ್ ದಿ ಪೀಪಲ್, ಬೈ ದಿ ಪೀಪಲ್, ಫಾರ್ ದಿ ಪೀಪಲ್’; ಅಂದರೆ ಪ್ರಜಾಪ್ರಭುತ್ವ ಎನ್ನುವುದು ...
vidyaram2
Apr 19, 20244 min read
bottom of page